ಮಾಳೋಜೀ ರಾಜೇ ಭೋಂಸ್ಲೆಯವರು ಬಹಳ ವರ್ಷಗಳಕಾಲ ಮಕ್ಕಳಾಗದೇ ಇದ್ದಾಗ ಮಹಾನ್ ಸೂಫಿ ಸಂತರಾಗಿದ್ದ 'ಹಜರತ್ ಶಾಹ್ ಶರೀಫ್ ಜೀ ರಹಮತುಲ್ಲಾಹಿ ಅಲೈ'... ಅವರ ದರ್ಗಾಕ್ಕೆ ಹೋಗಿ ಹರಕೆ ಹೊತ್ತು ತದನಂತರ ಅವರಿಗೆ ಎರಡು ಗಂಡುಮಕ್ಕಳಾಗಿ ಮೊದಲನೆಯವರು ಶಾಹ್ ಜೀ ಮತ್ತು ಎರಡನೇಯವರು ಶರೀಫ್ ಜೀ ಎಂದು ನಾಮಕರಣ ಪಡೆದುಕೊಂಡರು, ಆಗಿನ ಕಾಲಕ್ಕೆ ಹಾಗೂ ಅವತ್ತಿನ ಪುರುಷ ಪ್ರಧಾನ ಸಾಮಾಜಿಕ ವಿಚಾರಧಾರೆಗೆ ಅವಶ್ಯಕ ವಿಷಯವಾಗಿದ್ದು ಗಂಡು ಸಂತಾನ. ಹಾಗಾಗಿ ಮಾಳೋಜೀ ರಾಜೇ ಭೋಂಸ್ಲೆಯವರು ಅತೀವ ಸಂತುಷ್ಟರಾಗಿ ಸದರಿ ದರ್ಗಾದ ಪಕ್ಕದಲ್ಲಿ ಒಂದು ಕುಡಿಯುವ ನೀರಿನ ಹೊಂಡವನ್ನು ತೊಡಿಸಿದರು, ಇದರಿಂದ ದರ್ಗಾಕ್ಕೆ ಬರುವ ಜನರಿಗೆ ತುಂಬಾ ಸಹಾಯಕವಾಯಿತು. ಮಹಾರಾಷ್ಟ್ರದ ಸೂಫೀ ಪರಂಪರೆಯ ಜನರನ್ನು ಇದರ ಕುರಿತು ವಿಚಾರಿಸಿದಾಗ ಅವರು ಹೇಳುವ ಮಾತುಗಳು ತುಂಬಾ ವಿಶ್ವಸನೀಯ ಅನಿಸಿತು. ಆಗಿನ ಕಾಲದ ಭಾರತದಲ್ಲಿ ಧರ್ಮಗಳ ಮಧ್ಯ ವ್ಯತ್ಯಾಸ ಇರಲಿಲ್ಲ ಹಿಂದೂ ಅಥವಾ ಮುಸ್ಲಿಮರು ಅದೆಷ್ಟೋ ವಿವಿಧ ಪವಿತ್ರ ಸ್ಥಳಗಳಲ್ಲಿ ಜೊತೆ ಜೊತೆಯಾಗಿ ಧಾರ್ಮಿಕ ಕಾರ್ಯಗಳನ್ನು ಕೈಕೊಳ್ಳುತ್ತಿದ್ದರು, ಅಲ್ಲದೇ ವಿಶೇಷವಾಗಿ ಸೂಫಿಸಂತರ ಶಿಷ್ಯಂದಿರುಗಳ ಮದ್ಯ ಯಾವುದೇ ಧಾರ್ಮಿಕ ಭೇದಭಾವಗಳು ಇರಲಿಲ್ಲ.
ಮಾಳೋಜೀ ರಾಜೇ ಭೋಂಸ್ಲೆಯವರ ಜೀವನದಲ್ಲಿ ಅದೆಷ್ಟೋ ಅವರ ಆಚಾರ-ವಿಚಾರಗಳು ಸಂಪೂರ್ಣವಾಗಿ ಇಸ್ಲಾಂ ಧರ್ಮವನ್ನು ಹೋಲುತ್ತಿದ್ದವು. ಇದಕ್ಕೆ ಕಾರಣಗಳು ಸಾಕಷ್ಟಿವೆ ಆದರೆ ಮೊಘಲರಿಗಿಂತ ಮುಂಚೆ ಭಾರತವನ್ನು ಆಳುತ್ತಿದ್ದ ಸಾಕಷ್ಟು ಇಸ್ಲಾಂಧರ್ಮವನ್ನು ಒಪ್ಪಿಕೊಂಡ ರಾಜಮನೆತನಗಳು ಭಾರತದಲ್ಲಿನ ಕೆಳ ಸಮುದಾಯದ ಜನರಿಗೆ ಆಸ್ತಿ-ಪಾಸ್ತಿ ಹೊಂದುವ, ವಿದ್ಯೆಕಲಿಯುವ, ವ್ಯಾಪಾರ-ವ್ಯವಹಾರ ಮಾಡುವ ಹಾಗೂ ಸಂಪತ್ತನ್ನು ಹಣಕಾಸನ್ನು ಹೊಂದುವ ಅಧಿಕಾರಗಳನ್ನು, ರಾಜಕೀಯ ಅಧಿಕಾರ ಹಾಗೂ ಶಸ್ತ್ರ ಹಿಡಿಯುವ ಅಧಿಕಾರವನ್ನ ನೀಡಿದ್ದರು, ಅದೆಷ್ಟೋ ಮೂಲನಿವಾಸಿ ಸ್ಪರ್ಶ-ಅಸ್ಪೃಶ್ಯ ಸಮುದಾಯಗಳನ್ನು ತಮ್ಮ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುವುದಷ್ಟೇ ಅಲ್ಲದೇ, ಅವರಿಗೆ ಸೇನಾಪಡೆಗಳಲ್ಲಿ ವಿಶೇಷವಾದ ಅಧಿಕಾರಗಳು, ಅವರ ಸಾಮರ್ಥ್ಯ ವ ನಿಷ್ಠೆಗೆ ತಕ್ಕಂತೆ ಉನ್ನತ ಸ್ಥಾನಗಳನ್ನುಕೊಟ್ಟಿದ್ದರು ಜೊತೆಗೆ ಗ್ರಾಮಗಳಲ್ಲಿ ಹಳ್ಳಿಗಳಲ್ಲಿ ನಾಯಕತ್ವ ಸ್ಥಾನವಾಗಿದ್ದ ಪಾಟೀಲ್ ಗಿರಿ, ಜಮೀನ್ದಾರಿ, ಜಾಹಗೀರ್ ದಾರಿ ಎಂಬ ಹೆಸರುಗಳಲ್ಲಿ ಅವರಿಗೆ ವಿಶೇಷ ಸವಲತ್ತು, ಜಮೀನುಗಳು ಹಾಗೂ ಅಧಿಕಾರಗಳನ್ನು ಕೂಡ ನೀಡಿದ್ದರು ಹಾಗಾಗಿ ಮೂಲನಿವಾಸಿ ಜನರಿಂದ ಒಂದು ಭವ್ಯ ಸಾಮ್ರಾಜ್ಯದ ಅಡಿಪಾಯಹಾಕಲು ಸಾಧ್ಯವಾಗಿದ್ದು. ದಕ್ಷಿಣ ಭಾರತದಲ್ಲಿ ಇರುವ ಮುಸ್ಲಿಮ ರಾಜರು ಇಲ್ಲಿನ ಕೆಳಸಮುದಾಯದ ಜನರಿಗೆ ನೀಡುತ್ತಿದ್ದ ಪ್ರತಿನಿಧ್ಯವು ಸಾಮಾಜಿಕ ಶೋಷಣೆಯನ್ನೇ ಮಾಡುತ್ತಾ ಬಂದ ಧರ್ಮದ ಸ್ವಯಂ-ಘೋಷಿತ ವ್ಯವಸ್ಥಾಪಕರಿಗೆ ಕಂಠಕಪ್ರಾಯವಾಗಿತ್ತು. ಹಾಗಾಗಿ ಆಗಿನ ಕಾಲದ ಸೂಫಿಗಳ ಶಿಷ್ಯಂದಿರುಗಳಾದ ರಾಜಮನೆತನದವರು ಹಾಗೂ ಇಸ್ಲಾಮಿನ ಸಮಾನತೆಯ ವಿಚಾರಗಳನ್ನು ಒಪ್ಪಿ ಸೂಫಿಗಳ ಕೈಯಲ್ಲಿ ಧರ್ಮ ಧೀಕ್ಷೆಯನ್ನ ಪಡೆದ ಇಲ್ಲಿನ ಶೂದ್ರ ಸ್ವಾಭಿಮಾನಿಗಳು ಜೊತೆ ಜೊತೆಯಾಗಿ ಸಾಮಾಜಿಕ ಐಕ್ಯತೆಯನ್ನು ಮಾಡಿಕೊಂಡು ಅಧಿಕಾರದಲ್ಲಿ ಬಂದಿದ್ದರು, ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಪರಸ್ಪರ ಭ್ರಾತೃತ್ವದ ಸಮಾಜವನ್ನು ಕಿತ್ತು ಹಾಕುವ ನಿಟ್ಟಿನಲ್ಲಿ, ದಕ್ಷಿಣದ ಸುಲ್ತಾನರಿಂದ ಅಧಿಕಾರ ಕಿತ್ತುಕೊಳ್ಳುವ ನಿಟ್ಟಿನಲ್ಲಿ ಮೊಘಲರ ಜೊತೆ ಕೈ ಮೀಲಾಯಿಸಿ ಇಲ್ಲಿನ ಮೂಲನಿವಾಸಿಗಳನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ, ಇದಕ್ಕೆ ಕನ್ನಡಿ ಹಿಡಿಯುವ ಸಾಕ್ಷಿಯಾಗಿ ಶಿವಾಜಿ ಹಾಗೂ ಸಂಭಾಜಿ ಮಹಾರಾಜರುಗಳ ಮರಣದ ಇತಿಹಾಸವನ್ನು ಸರಿಯಾಗಿ ನಾವೆಲ್ಲ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅವರ ಸಾವಿನಿಂದ ಯಾರಿಗೆ ಲಾಭವಿತ್ತು? ಇದನ್ನು ಹುಡುಕುವ ಯತ್ನ ಯಾಕೆ ನಮ್ಮ ಜನರು ಮುಂಚೆ ಮಾಡಿರಲಿಲ್ಲ? ಈಗ ಇತಿಹಾಸವು ಸ್ವಚಂದ್ಧವಾದ ನೀರಿನಂತೆ ಮುಂದೆ ಬಂದಿಂದೆ ಹಾಗಾಗಿ ಅವರ ಕಪಟ ನಾಟಕ ಇನ್ನು ಮುಂದೆ ನಡೆಯದು. ಮಾಳೋಜೀ ರಾಜೇ ಭೋಂಸ್ಲೆಯವರ ಜೀವನ ನಮಗೆಲ್ಲ ಮಾದರಿಯಾಗಲಿ, ಮೂಲನಿವಾಸಿ ಸಮುದಾಯಗಳು ಯಾವುದೇ ಜಾತಿಯಲ್ಲಿದ್ದರೂ ಅವರ ಶೋಷಣೆ ನಿಲ್ಲುವುದಿಲ್ಲ ಅದಕ್ಕೊಂದು ಸಂಪೂರ್ಣ ವಿರಾಮ ಹಾಕುವುದಾದರೆ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳ ಮರು ವಿಮರ್ಶೆಗೆ ಕರೆ ಕೊಡಬೇಕು. ಸಮಾನತೆ ಹಾಗೂ ಮಾನವ ಭ್ರಾತೃತ್ವವನ್ನು ಒಪ್ಪುವ ಎಲ್ಲ ಧರ್ಮಗಳು ಒಂದೇ ಎಂಬ ಸಾರವನ್ನು ಈ ದೇಶದ ಬಹುಜನರಿಗೆ ಅರ್ಥೈಸಬೇಕು.
ಜೈ ಭೀಮ್... ಜೈ ಭಾರತ್... ಜೈ ಟಿಪ್ಪೂ...
