Thursday, October 6, 2022

ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ, ನಿಮಗೊಂದು ಕಿವಿಮಾತು.

ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ… ದಯವಿಟ್ಟು ಓದಿ.


ಗಾಂಧಿ ಪರಿವಾರದ ಕರುಳಿನ ಕುಡಿ, ರಾಹುಲ್… ಭಾರತ ಜೋಡಿಸುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತಿದ್ದಾರೆ, ಮಾಡಲಿ, ಅವರಪ್ಪ ಮಾಡಿದ ಸಾಲವನ್ನು ಮಗನೇ ತೀರಿಸಬೇಕು. 

ನಾನು ಹೀಗೆ ಹೇಳಲು ಇರುವ ಕಾರಣ ಎಲ್ಲರಿಗೂ ಗೊತ್ತಿದೆ. ಅದೇನೆಂದು ಸ್ವಲ್ಪ ಮಟ್ಟದ ಮಾಹಿತಿ ಈ ಕೆಳಗೆ ಕೊಡಲಾಗಿದೆ.


ರಾಹುಲ್ ಪ್ರತಿದಿನ ನೂರಾರು ಹಿಂದೂಗಳಿಗೆ ಭೇಟಿಯಾಗುತ್ತಾ ಇದ್ದಾರೆ, ಆದರೆ ಅದೂ ನಮ್ಮ ನಿಯತ್ತಿನ ಸಿಪಾಹಿಗಳಾದ, ತುಂಡು ಬಿದ್ದ ತಕ್ಷಣ ಬಾಲಾ ಅಲ್ಲಾಡಿಸುವವರಿಗೆ ಕಾಣುವುದೇ ಇಲ್ಲ. ಒಂದು ಮುಸ್ಲಿಮರ ಮನೆಯ ಚಿಕ್ಕ ಮಗು ಅಥವಾ ಒಬ್ಬ ಯುವತಿ ರಾಹುಲ್ ಗೆ ಭೇಟಿಯಾದರೆ ಅದೂ ರಾಷ್ಟ್ರ ಮಟ್ಟದ ಸುದ್ದಿ? ಯಾಕೆ? ಹೇಗೆ? ಯಾರು? (ಮಾಡುತ್ತಿದ್ದಾರೆ) ಒಂದು ಚಿಕ್ಕ ಅವಲೋಕನ.


  • ಮುಸ್ಲಿಮರ ಪರ ಕಾಂಗ್ರೇಸ್ ಇದೆ ಎಂದು ಬಿಂಬಿಸುವ ಉದ್ದೇಶ ಉಭಯ ಪಕ್ಷಗಳ ಅನೈತಿಕ ಕೂಟದ ಸಾಕ್ಷ್ಯ!

  • ಮುಸ್ಲಿಮರ ಮತ ಕಾಂಗ್ರೆಸ್ ಗೆ ಬಿದ್ದರೆ ಲಾಭ ಯಾರಿಗೆ ಮತ್ತು ಹೇಗೆ?

  • ಮುಸ್ಲಿಮೇತರರು ಮುಸಲ್ಮಾನರ ದ್ವೇಷದಿಂದ ಕಾಂಗ್ರೆಸ್ ನಿಂದ ದೂರ ಆಗಲಿ ಅನ್ನುವ (ಚಿಕ್ಕ) ಉದ್ದೇಶಕ್ಕಿಂತ, ಮುಸ್ಲಿಮರ ಮತಗಳು ಕಾಂಗ್ರೆಸ್ಸಿಗೆ ಮಾತ್ರ ಬೀಳಲಿ ಅನ್ನುವುದು (ಮುಖ್ಯ) ಉದ್ದೇಶ.

  • ಈ ದೇಶದಲ್ಲಿ ಕಂಡದ್ದು ಇರುವುದೇ ಇಲ್ಲ, ಇದ್ದದ್ದು ಕಾಣುವುದೇ ಇಲ್ಲ.

  • ಮುಸ್ಲಿಮರ ಮತ ಕಾಂಗ್ರೆಸ್ಸಿಗೆ ಬಿದ್ದರೆ, ಬಿಜೆಪಿ ಕಾಂಗ್ರೆಸ್ಸ್ ಎರಡೂ safe? ಅದು ಹೇಗೆ ಸಾಧ್ಯ?

  • ಮುಸಲ್ಮಾನರು ಹಾಗೂ ಇತರೇ ಶೋಷಿತ ಸಮುದಾಯಗಳು ಸ್ವಾಭಿಮಾನದ ರಾಜಕೀಯಕ್ಕೆ ಇಳಿದರೆ ಇವರಿಬ್ಬರ ಲೆಕ್ಕಾಚಾರ ಬುಡಮೇಲು ಆಗುವುದು ಖಚಿತ.

  • ಮುಸಲ್ಮಾನರು ಕಾಂಗ್ರೆಸ್ ಬಿಟ್ಟರೆ, ಅತಿ ಹೆಚ್ಚು ಹಾನಿಯಾಗುವುದು ಕಾಂಗ್ರೆಸ್ಸಿಗೆ ಅಲ್ಲವೇ ಅಲ್ಲ, ಬಿಜೆಪಿಗೆ ತುಂಬಾ ಜಾಸ್ತಿ.

  • ಅದೇರೀತಿ ಕಾಂಗ್ರೆಸ್ಸ್ ನಿಂದ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ವ ಪಂಗಡದ ಓಟು ಜಾರಿ ಹೋದರೆ, ಈ ದೇಶದಲ್ಲಿ ಮೇಲ್ಜಾತಿಯ ಶ್ರೀಮಂತರ ಕಪಿ ಮುಷ್ಟಿಯಿಂದ ಭಾರತದ ಅಧಿಕಾರ ತಪ್ಪುವ ಸಾಧ್ಯತೆ ತುಂಬಾ ಜಾಸ್ತಿ ಇದೆ. 

  • ಕಾಂಗ್ರೆಸ್ ಜೀವಂತವಿಟ್ಟರೆ ಮಾತ್ರ ಅವರಿಬ್ಬರ ಆಟ ನಡೆಯೋದು.

  • ಮೇಲ್ನೋಟಕ್ಕೆ ರಾಜಕೀಯ ನೋಡುವ, ಬಾಯಿ ಚಪಲಕ್ಕೆ ರಾಜಕೀಯ ಮಾತನಾಡಿ ಮನೆಗೆ ಹೋಗಿ ಹೆಂಡತಿಯರ ಮೇಲೆ ದಬ್ಬಾಳಿಕೆ ಮಾಡುವ ರಣಹೇಡಿಗಳಿಗೆ, ಈ ಕುತಂತ್ರಿಗಳು ಮಾಡುವ ಷಡ್ಯಂತ್ರಗಳು ಅರ್ಥವಾಗಲ್ಲ.

  • ಮಿದುಳಿನಲ್ಲಿ ಮತ್ತೊಂದು ಮಿದುಳನ್ನು ಇಟ್ಟುಕೊಂಡವರನ್ನು  ಅರ್ಥಮಾಡಿಕೊಳ್ಳಲು ಆ ಮಹಾಮಹಿಮನ ಕೃಪೆ ಬೇಕು, ಎಲ್ಲರಿಗೂ ಅಂತರಾಳದ ಕಂಗಳು ತೆರೆಯುವುದಿಲ್ಲ.

  • ಮುಸಲ್ಮಾನರು, ತುಳಿತಕ್ಕೆ ಒಳಪಟ್ಟ ಹಿಂದೂ, ಕೈಸ್ತ, ಬೌದ್ಧ ಮತ್ತು ಪ.ಜಾ & ಪ. ಪಂ. ಗಳು ಕಾಂಗ್ರೆಸ್ ತ್ಯಜಿಸಿದ ಕೇವಲ ಒಂದು ವರ್ಷದಲ್ಲಿ ಈ ದೇಶದಲ್ಲಿ ಮಹಾನ್ ಅಭಿವೃದ್ದಿ ಆಗುತ್ತದೆ. ಈ ದೇಶದಲ್ಲಿ ಯಾರೂ ಬಡವರೇ ಇರುವದಿಲ್ಲ, ಬದಲಾಗಿ ಎಲ್ಲರಿಗೂ ಸಮಾನ ಅವಕಾಶಗಳು ಒಂದೇ ರೀತಿಯ ಸೌಲಭ್ಯಗಳು ಮತ್ತು ಗೌರವಯುತ ಬದುಕು ಸಿಗುತ್ತವೆ.

  • ಅದಕ್ಕೆ ಪೂರಕವಾದ ಸಂಪೂರ್ಣ ವ್ಯವಸ್ಥೆ ಬಾಬಾ ಸಾಹೇಬರು, ಕಾಂಶಿರಾಂ ಜೀ, ವಾಮನ್ ಮೇಶ್ರಾಂ ಜೀ, ನಮಗೆ ಮಾಡಿ ಕೊಟ್ಟಿದ್ದಾರೆ.

  • ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ ದಯವಿಟ್ಟು ಅರ್ಥಮಾಡಿಕೊಳ್ಳಿ, ಮುಸಲ್ಮಾನರನ್ನು ಜೊತೆಗೆ ಇಟ್ಟುಕೊಂಡು ಮುಗಿಸಿದ ಕಾಂಗ್ರೆಸ್ಸಿನ ರೀತಿಯಲ್ಲಿ ಇತರರನ್ನು ಜೊತೆಗಿಟ್ಟುಕೊಂಡು ಮುಗಿಸುವ ಎಲ್ಲ ಕೆಲಸಗಳನ್ನೂ ಬಿಜೆಪಿ ಮಾಡುತ್ತಿದೆ.

  • ಇದನ್ನು ಅರಿಯದೆ ನೀವು ಈ ದೇಶದಲ್ಲಿ ರಾಜಕೀಯ ಮಾಡುವುದು ಅಸಾಧ್ಯ.

  • ಒಂದು ಕಾಲದಲ್ಲಿ ಜೈನ ಧರ್ಮ ಬಾಹುಳ್ಯ ಪ್ರದೇಶವಾದ ಕರುನಾಡಿನಲ್ಲಿ ಜೈನರು ಅಲ್ಪ ಸಂಖ್ಯಾತರು ಏಕೆ? ಹೇಗೆ? ಯಾರಿಂದ? ಎಲ್ಲಿ ಹೋದರು ಆಗಿನ ಜೈನರೆಲ್ಲ ಏನಾದರೂ?

  • ಬೌದ್ಧರು ಸಾವಿರಾರು ವರ್ಷ ಆಳಿದ ಸಮಸ್ತ ಭಾರತದಲ್ಲಿ ಈಗ ಬೌದ್ಧರು ಅತೀ ವಿರಳರು ಹೇಗಾಯ್ತು? ಯಾರು ಮಾಡಿದರು? ಏಕೆ ಮಾಡಿದರು? ಇದರಿಂದ ಆದ ಲಾಭ ಯಾರಿಗೆ ಸೇರಿದ್ದು?

  • ಈಗ ಅದೇ ಜನರು ಮುಸಲ್ಮಾನರನ್ನು ಏಕಾಂಗಿಯಾಗಿ ಮಾಡಿ, ತಮ್ಮಿಂದಲೇ ಶೋಷಿತವಾದ ಸಮುದಾಯಗಳನ್ನು ತಮ್ಮ ಅಡಿಯಲ್ಲೇ ಸೇರಿಸಿಕೊಂಡು ಈ ಏಕಾಂಗಿ ಸಮುದಾಯವನ್ನು ಎಲ್ಲರೂ ಸ್ವೇಶಿಸುವ ಮಟ್ಟಕ್ಕೆ ದಶಕಗಳ ಹಿಂದೆಯೇ ತಂದಿಟ್ಟಿದ್ದಾರೆ.

  • ಇದು ಕೇವಲ ಬಿಜೆಪಿಯ ಕೆಲಸವಲ್ಲ ಇದು ಕಾಂಗ್ರೆಸ್ಸಿನ ಕನಸಿನ ಕೂಸು ಅದನ್ನು ಪೌಷ್ಟಿಕ ಆಹಾರ ನೀಡಿ ಸಲುಹುತ್ತ ಇರುವುದು ಮಾತ್ರ ಬಿಜೆಪಿ.


ಈ ದೇಶದಲ್ಲಿ ಹಿಂದೂ appeasement ರಾಜಕಾರಣ ಶುರು ಮಾಡಿದ್ದು. ರಾಜೀವ್ ಸನ್ ಆಫ್ ಇಂದಿರಾ (ತಂದೆಯ ಹೆಸರು ಬರೆಯುವ ಅವಶ್ಯಕತೆ ಇಲ್ಲ, ಇದು ರಾಜಕೀಯ ವಿಚಾರ ಆಗಿರುವುದರಿಂದ, ತಾಯಿಯ ಮನೆಯ ಬಳುವಳಿ ಅತೀ ಮುಖ್ಯ), ಜನಸಂಘ ಅಥವಾ ಬಿಜೆಪಿ ಯವರು ಹಿಂದೂಗಳ ಮನಸ್ಸನ್ನು ನಾಶ ಮಾಡುವುದಕ್ಕೆ ಮೊದಲೇ ರಾಜೀವ್ ಈ ದೇಶಕ್ಕೆ ಗೋ ಮಾತೆಯನ್ನು ದೇವರಾಗಿ ಕೊಟ್ಟಿದ್ದರು. ಬಾಬರಿ ಮಸೀದಿಯನ್ನು ಕೆಡವಿ ಮಸ್ಲಿರನ್ನು ನೈತಿಕ ಹಾಗೂ ಮಾನಸಿಕ ಖಿನ್ನತೆಗೆ ಒಳಪಡಿಸುವ ಕೆಲಸ ಮಾಡಿದ್ದರು.

ಹಿಂದೂ ಅಂದರೆ ಕೇವಲ ಉತ್ತರ ಭಾರತದ ಹಾಗೂ ಉಚ್ಛಮಟ್ಟದ ಬ್ರಾಹ್ಮಣರ ನೇತೃತ್ವದಲ್ಲಿ ಇತರೆ ಜಾತಿಗಳು ಒಂದಾಗುವುದು ಎಂಬ ಪರಿಕಲ್ಪನೆಯನ್ನು ಕೊಟ್ಟಿದ್ದರು. ಇದಕ್ಕೇ ಎದೆಯೊಡ್ಡಿ ವಿರೋಧಿಸಿದ ದ್ರಾವಿಡರ ರಕ್ತದ ಓಕುಳಿ ಆಡಿದ್ದು ನಮಗೆ ನೆನಪಿದೆ. ಇದರ ವಿರುದ್ಧ ದ್ವನಿ ಎತ್ತಿದ ಸಿಖ್ಖರ ಮಾರಣಹೋಮವು ನಾವು ಮರೆತಿಲ್ಲ.


ಉತ್ತರ ಭಾರತದ ಮುಸ್ಲಿಮರು ಧರ್ಮ ನ್ಯಾಯಕ್ಕೆ ಮಿಗಿಲಾಗಿ ಅನ್ಯಾಯದ ಜೊತೆಗೆ ನಿಂತಿದ್ದ ಕಾರಣ ಅವರಿಗೆ ಅರ್ಥವಾಗದ ರೀತಿಯಲ್ಲಿ ಅವರನ್ನು ಮುಗಿಸಲಾಯಿತು, ಮುಸ್ಲಿಮರ ಪ್ರಾಬಲ್ಯವನ್ನು ಮುಗಿಸುವ ಎಲ್ಲಾ ತಂತ್ರಗಳನ್ನು ಸೃಷ್ಟಿಸಿದ್ದು, ಪ್ರಯೋಗಿಸಿದ್ದು, ಹೆಚ್ಚಿನ ಮಟ್ಟಕ್ಕೆ ಯಶಸ್ಸನ್ನು ಗಳಿಸಿದ್ದು Grand Mother & Father of ರಾಹುಲ್ ಕಾಲದಲ್ಲಿಯೇ ಎಂಬುದು ಅತೀ ಮುಖ್ಯ. ಉತ್ತರದವರು ಶ್ರೇಷ್ಠ ದಕ್ಷಿಣ ದವರು ಕನಿಷ್ಠ ಎಂಬ ಹೇಳಿಕೆ ನೀಡಿದ್ದು, ಅಮಲ್ಜಾರಿಯಲ್ಲಿ ತಂದಿದ್ದು ಕೂಡಾ ಅವರೇ ಎಂದರೆ ತಪ್ಪಲ್ಲ.


ಹಗಲು ರಾತ್ರಿ ಮುಸ್ಲಿಮರ ಶಕ್ತಿಯನ್ನು ಕ್ಷೀಣಿಸಿದ ಅವರ ತಂತ್ರ ಗಳನ್ನು ಬಳಸಲು ಬಿಜೆಪಿ ಇಂದ ಸಾಧ್ಯವಿಲ್ಲ, ಯಾಕೆಂದರೆ, ಜೊತೆಗಿದ್ದು ನಾಶಮಾಡುವುದು ಏನೆಂದು ಕಾಂಗ್ರೆಸ್ ಇತಿಹಾಸದಿಂದ ಕಲಿಯಲೇ ಬೇಕು. ಅದೇ ಸೂತ್ರವನ್ನು ಚಾಚುಕಟ್ಟಗಿ ಬಳಸಿ ಬಿಜೆಪಿಯು ಇತರೇ ಶೋಷಿತ ಸಮುದಾಯಗಳನ್ನು ವ್ಯವಸ್ಥಿತವಾಗಿ ಬಗ್ಗು ಬಡಿಯುತ್ತಿದೆ.


ಯಾವ ಹಿಂದುಳಿದ ವರ್ಗಗಳು ಬಿಜೆಪಿ ನಂಬಿಕೊಂಡು ಅಧಿಕಾರದ ಅಮಲಿನಲ್ಲಿ ತೇಲುತ್ತಾ ಇದ್ದಾರೋ, ಅವರೊಂದುದಿನ ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕೈ ಚಾಚುವ ಹಿನಾಯಮಾನ ಪರಿಸ್ಥಿತಿಗೆ ಬಂದೆ ಬರುತ್ತಾರೆ.


ದಯವಿಟ್ಟು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಿ ಶ್ರೀಮಂತ ರಾಷ್ಟ್ರದ ದರಿದ್ರ ಪ್ರಭುಗಳೇ.


#MKM

✍️ ಎಂ.ಕೆ.ಮೇತ್ರಿ,

ವಕೀಲರು. ಬೆಂಗಳೂರು.

No comments:

Post a Comment