ಓ ಮಾಂಸಾಹಾರವೇ,
ಮಡಿ ಮೈಲಿಗೆ ಕಾಣದ ಜೀವನಾಧಾರವೇ
ಸಮಾನತೆ ಮೆರೆದ ಸ್ನೇಹಾಧಾರವೆ,
ನಿನಗಿದೋ ನನ್ನ ಲೇಖನಿಯ ಉಪಹಾರ
ಮಿಶ್ರಣಗೊಳ್ಳದ ಶುದ್ಧಾಹಾರವೇ,
ಮಡಿ ಮೈಲಿಗೆ ಕಾಣದ ಜೀವನಾಧಾರವೇ,
ಅದೇನು ಮೋಹವೋ?
ನಿನ್ನನ್ನು ಊಹಿಸಿಕೊಂಡಾಗ,
ಅದೇನು ಮಾಯೆಯೋ?
ನಿನ್ನನ್ನು ಕೈಯಲ್ಲಿ ಹಿಡಿದಾಗ,
ರಾಜರು ಸಾಮ್ರಾಜ್ಯವೇ ಮರೆತರೋ
ಪ್ರೇಮಿಗಳು ರತಿಯನ್ನೇ ಮರೆತರೋ
ನಿನ್ನ ಪ್ರಸಾದ ಉಂಡಾಗ,
ಜನ ದೇವನನ್ನೆ ಮರೆತರೋ,
ಆ ನಿನ್ನ ಬಣ್ಣದ ಸೆಳೆತ,
ಓಹ್ ಮಸಾಲೆಗಳ ಸೊಬಗು
ಹುರಿದಾಗ ಬರುವ ನಿನ್ನ ಸುವಾಸನೆ,
ಎಣ್ಣೆಯಲ್ಲಿ ಕರೆದಾಗ ಕಂಡ ಕೋಲಾಹಲ
ತಿಳಿದವರಿಗೆ ಮಾತ್ರ ನಿನ್ನ ಬಾಯಿ ರುಚಿ
ಊಹೆಗೆ ನಿಲುಕದ ಭಾವನೆಯೇ, ನಿನ್ನಲ್ಲಿ ಎನ್ನ ಅಭಿವೃಚಿ
ನಿನ್ನ ವಾಸನೆಯು ಸೆಳೆದಾಗ ಜನಿವಾರ ಜೆಬು ಸೇರಿತು
ಉಡದಾರ ಅಡ್ಜಸ್ಟ್ ಆಯಿತು,
ನೊಂದ ಮನಕ್ಕೆ ಹಿತವಾಗಿ ಬಂದೆ
ಸಂತಸದ ಹಬ್ಬಕ್ಕೆ ಬಲಿಯಾದ ನೀನು
ದುಃಖದ ತಿಥಿಗೂ ಆಸರೆಯಾದೆ.
ತಿನ್ನೋರು ಸದಾ ನಿನ್ನವರು,
ತಿನ್ನದೇ ಇದ್ದವರಿಗೂ ನಿನ್ನದೇ ಚಿಂತೆ,
ನಾಟಿ ಕೋಳಿ ಸಾರಂತೆ, ಬುರ್ಲಿ ಕೌಜಗ ಮೆಲಂತೆ,
ಜಾತಿ ಭೇದ ಗಳ ಮರೆಸುವ ಚಿಕನ್ ನಿನಂತೆ,
ಧರ್ಮಂಧರಿಗೆ ಬುದ್ಧಿ ಹೇಳುವ ಮಟನ್ ಬೇಕಂತೆ,
ಬಡವರಪಾಲಿಗೆ ಬೀಫಾದ ನೀನು
ಉಳ್ಳವರಪಾಲಿಗೆ ಮಿನಾದೇ ಯಲ್ಲವೇ?
ಮುಳ್ಳನ್ನು ಸರಿಸಿ ತಿನ್ನಿಸಿದ ಅಪ್ಪನ ನೆನಪು
ನೀರಲ್ಲಿ ತೊಳೆದು ತಿನ್ನಿಸಿದ ಅಮ್ಮನ ನೆನಪು
ನಿನ್ನೊಂದಿಗೆ ಕಳೆದ ನೂರಾರು ನೆನಪು,
ಅಟ್ಟದ ಮೇಲೆ ಅಜ್ಜಿ ನಿನ್ನ ಬಿಸಿಲಿಗೆ ಇಟ್ಟಾಗ
ಕದ್ದು ಗೆಳೆಯರೊಂದಿಗೆ ನಿನ್ನ ಸುಟ್ಟು ತಿಂದಾಗ
ಸ್ವರ್ಗದ ಕಲ್ಪನೆ ನೀಡಿದ ಆ ನಿನ್ನ ಉಪಕಾರ
ಯಾರದೋ ಮಾತಿಗೆ ಬೇಡ ನನ್ನ ಮೇಲೆ ಅಪಕಾರ
ಪಾರೆನ್ ದೆಸಾ ಸೇರಿ ಸಿರಿವಂತರ ಜೇಬು ತುಂಬಿದೆ
ಕಸಾಯಿ ಖಾನೆಯಿಂದ ಬಡವರ ಹೊಟ್ಟೆ ತುಂಬಿದೆ
ನೀನೇ ಬೇಡ ಎಂದ ಜನ ನಿನ್ನ ಪ್ರಚಾರಕ್ಕೆ ಇಳಿದಿದೆ
ಮರೆಯದಿರು ನಿನ್ನನ್ನು ನಂಬಿದ ಪ್ರೇಮಿಗಳ
ಖಾವಿ-ಖಾದಿ ಈಗ ನಿನ್ನ ಸೇವೆಗೆ ನಿಂತಿದೆ.
ಸುಕ್ಕಾ, ಚಾಪ್ಸ, ಕೀಮಾ, ಕಬಾಬು
ಕುಡಿದವರಿಗೆ ಗೊತ್ತು ನಿನ್ನ ಸೂಪೇ ಶರಾಬು
ಅನ್ನದೊಳಗಾದರೇನು?
ರೊಟ್ಟಿಯೊಂದಿಗಾದರೇನು?
ಸಕಲ ಭೋಜನದಲ್ಲಿ ನಿಂದೆ ರುಬಾಬು.
ನಿನ್ನೊಲವೇ ಜೀವನದ ಸಾಕ್ಷಾತ್ಕಾರ
ತಿಂದವನು ತೋರಿಸಿದ ಚಮತ್ಕಾರ
ಮಿತವಾಗಿ ತಿಂದವನು ಗಟ್ಟಿಯಾದ
ಗರಡಿಯಾಡಿ ತಿಂದವನು ಜಟ್ಟಿಯಾದ
ತಿನ್ನದೇ ಕೊರಗಿದವನು ಜುಟ್ಟು ಆದ
ದ್ವೇಷದ ಜ್ವಾಲೆಯಲಿ ಬೆಂದು ಹೋದ.
ತಿನ್ನೋರ ಮಧ್ಯ ಜಗಳ ಹಚ್ಚಿದ
ತಿನ್ ಸೋರ ಹೊಟ್ಟೆಗೆ ಬೆಂಕಿ ಹಚ್ಚಿದ
ಅಸೂಯೆ ಯಿಂದ ಕೊರಗಿದ ಪಾಪಿ
ಹಲಾಲ್ ಒಳಗೆ ಜಟಕಾ ತಂದಿದ್ದ.
ಕರ್ಮಯೋಗಿಗಳು ಎಚ್ಚೆತ್ತಾರೋ
ಮೈಗಳ್ಳರ ಹಿಂಬದಿಗೆ ಒದೆಯುತ್ತಾರೋ
ಹಸಿರು ಕ್ರಾಂತಿಯ ಮೆರೆಯುತ್ತಾರೋ
ನಿನ್ನ ತಿಂದವರು ಚರಿತ್ರೆ ಬರೆಯುತ್ತಾರೋ
ದ್ವೇಷವ ಸೋಲಿಸಿ ಪ್ರೀತಿಯ ಸಾಮ್ರಾಜ್ಯ
ನೀಲಿ ಬಾವುಟದೀ ಕಟ್ಟುತ್ತಾರೋ.
ಜೈ ಭೀಮ್… ಜೈ ಟಿಪ್ಪೂ… ಜೈ ಡಿಎಂಎಸ್…
No comments:
Post a Comment